ತಿರುವನಂತಪುರ: ‘ಒಖಿ’ ಚಂಡಮಾರುತದಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಕೇರಳದ 15 ಮೀನುಗಾರರನ್ನು ಭಾರತೀಯ ಕರಾವಳಿ ಪಡೆ ರಕ್ಷಿಸಿದೆ.
ಕರಾವಳಿ ಪಡೆಯ ಹಡಗು ಕೇರಳದ ವಿಳಿಂಜಂ/ಕೊಲ್ಲಂನಲ್ಲಿ ಸಂಕಷ್ಟದಲ್ಲಿದ್ದ 15 ಮೀನುಗಾರರನ್ನು ರಕ್ಷಿಸಿದೆ ಎಂದು ಕರಾವಳಿ ಪಡೆ ಟ್ವೀಟ್ ಮಾಡಿದ್ದು, ಅದೇ ಟ್ವೀಟ್ ಅನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ರೀ ಟ್ವೀಟ್ ಮಾಡಿದ್ದಾರೆ.