ತಾಲ್ಲೂಕಿನ ಸಿದ್ದಾಪುರ–ಹಾರ್ಸಿಕಟ್ಟಾ–ಗೋಳಿಮಕ್ಕಿ ರಸ್ತೆಯಲ್ಲಿರುವ ಮಾಣಿ ಹೊಳೆ ಸೇತುವೆ ಕೆಲವು ವರ್ಷಗಳ ಹಿಂದೆ ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಳೆಗಾಲ ಆರಂಭವಾದ ನಂತರ ಸಾರಿಗೆ ಸಂಸ್ಥೆಯ ಬಸ್ಗಳು ಸಿದ್ದಾಪುರ–ಹಾರ್ಸಿಕಟ್ಟಾ–ಮುಠ್ಠಳ್ಳಿ–ಹಾಲ್ಕಣಿ–ಕೋಡ್ಸರ ಮಾರ್ಗವಾಗಿ ಹಾಗೂ ಶಿರಸಿಗೆ ಹೇರೂರು, ಹೆಗ್ಗರಣಿ ಮಾರ್ಗವಾಗಿ ಸಂಚರಿಸುತ್ತಿದ್ದವು. ಈಗ ಮೊದಲಿನಂತೆ ಪುನಃ ಮಾಣಿ ಹೊಳೆಯ ರಸ್ತೆಯ ಮೂಲಕ ಬಸ್ ಸಂಚಾರ ಆರಂಭವಾಗಿದೆ.