ಹೋರಾಟ ಸಮಿತಿ ಸದಸ್ಯ ಈರಣ್ಣ ಗಡಗಿಶೆಟ್ಟರ ಮಾತನಾಡಿ, ‘ಮಹದಾಯಿ ಹೋರಾಟ ಇಡೀ ರಾಜ್ಯದಲ್ಲಿ ಜನಾಂದೋಲನವಾಗಿ ಬದಲಾಗಿದೆ. ಯಾವ ರಾಜಕೀಯ ಪಕ್ಷದಿಂದಲೂ ಇದನ್ನು ಹತ್ತಿಕ್ಕಲು ಸಾಧ್ಯವಿಲ್ಲ. ರೈತರು ಶಾಂತಿಯುತವಾಗಿ, ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಇದನ್ನು ಮನಗಂಡು ಬೇಡಿಕೆಗೆ ಸ್ಪಂದಿಸಬೇಕು’ ಎಂದರು. ಧರಣಿಯಲ್ಲಿ ರಮೇಶ ನಾಯ್ಕರ, ಎಸ್.ಕೆ.ಗಿರಿಯಣ್ಣವರ, ಹನಮಂತ ಪಡೆಸೂರ, ವೆಂಕಪ್ಪ ಹುಜರತ್ತಿ, ಚನ್ನಪ್ಪಗೌಡ ಪಾಟೀಲ ಇದ್ದರು.