ಕಡಲೆ ಬೆಳೆಗೂ ಮಳೆಯ ಪರಿಣಾಮ ತಟ್ಟಿದೆ. ಮಳೆಯಿಂದ ಗಿಡದಲ್ಲಿನ ಹುಳಿ ಅಂಶ ಕುಗ್ಗಲಿದ್ದು, ಹುಳ ಆವರಿಸಲಿದೆ. ಇದರಿಂದ ಇಳುವರಿ ಕುಂಠಿತ ಆಗಬಹುದು ಎನ್ನುತ್ತಾರೆ ಬಂಡಿಲಕ್ಕನಕೊಪ್ಪಲು ರೈತ ಅಣ್ಣಪ್ಪ. ಹಳೇಬೀಡು ಹೋಬಳಿಯಲ್ಲಿ ಈ ಹಂಗಾಮಿನಲ್ಲಿ 150 ಹೆಕ್ಟೇರ್ನಲ್ಲಿ ಕಡಲೆ, ತಲಾ 250 ಹೆಕ್ಟೇರ್ನಲ್ಲಿ ಅವರೆ, ಹಾಗೂ ಅಲಸಂದೆ ಬಿತ್ತನೆಯಾಗಿದೆ.