ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್‌ ಮಿಲಾದ್‌ ಮೆರವಣಿಗೆ ಸಡಗರ

Last Updated 3 ಡಿಸೆಂಬರ್ 2017, 9:07 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಈದ್‌ ಮಿಲಾದ್‌ ಆಚರಣೆ ಅಂಗವಾಗಿ ಮುಸ್ಲಿಮರು ಶನಿವಾರ ನಗರದಲ್ಲಿ ಸಡಗರದಿಂದ ಈದ್‌ ಮಿಲಾದ್‌ ಮೆರವಣಿಗೆ ನಡೆಸಿದರು. ನಗರದ ಅಂಡೇ ಛತ್ರದ ಬಳಿಯಿಂದ ಬೆಳಿಗ್ಗೆ 10.15ಕ್ಕೆ ಮೆರವಣಿಗೆ ಹೊರಟಿತು. ಸಹಸ್ರಾರು ಮುಸ್ಲಿಮರು ಪಾಲ್ಗೊಂಡಿದ್ದರು. ‘ಜಿಂದಾಬಾದ್‌–ಜಿಂದಾಬಾದ್‌ ಇಸ್ಲಾಂ ಜಿಂದಾಬಾದ್’, ‘ಅಲ್ಲಾಹು ಅಕ್ಬರ್‌’ ಘೋಷಣೆಗಳನ್ನು ಕೂಗಿದರು.

ಧ್ವಜಗಳನ್ನು ಹಿಡಿದು ಮೆರವ ಣಿಗೆಯಲ್ಲಿ ಸಾಗಿದರು. ಬಹು ತೇಕರು ಶ್ವೇತವಸ್ತ್ರಗಳನ್ನು ತೊಟ್ಟಿದ್ದರು. ಯುವಪಡೆ ಮೆರವಣಿಗೆಯದ್ದಕ್ಕೂ ನೃತ್ಯ ಮಾಡಿ ಸಂಭ್ರಮಿಸಿದರು. ಕೆಲವರು ಪುಟಾಣಿ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಸಾಗಿದರು. ಮುಸ್ಲಿಂ ಮಹಿಳೆಯರು, ಸಾರ್ವಜನಿಕರು ಮೆರವಣಿಗೆ ಮಾರ್ಗದಲ್ಲಿನ ಕಟ್ಟಡ ಗಳ ಮೇಲೆ ನಿಂತು ಸೊಬಗು ವೀಕ್ಷಿಸಿ ದರು. ಮುಸ್ಲಿಮರು ಪರಸ್ಪರ ಶುಭಾಶಯ ಕೋರಿದರು.

‘ಬ್ರಿಟಿಷರ ವಿರುದ್ಧ ಹೋರಾಡಿ ಕನ್ನಡ ಮಣ್ಣಿಗಾಗಿ ಮಡಿದದವ ಟಿಪ್ಪು...’, ‘ಟಿಪ್ಪು ಮೈಸೂರು ಟೈಗರು...’, ‘ಕನ್ನಡ ಮಣ್ಣಿಗೆ ಹೆಮ್ಮೆ ಟಿಪ್ಪು...’ ಮೊದಲಾದ ಟಿಪ್ಪು ಸುಲ್ತಾನ್‌ ಗುಣಗಾನದ ಗೀತೆಗಳು ಧ್ವನಿವರ್ಧಕದಲ್ಲಿ ಮೊಳಗಿದವು. ಮುಸ್ಲಿಂ ಯುವಕರು ಆ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು. ಚಿಣ್ಣರು ಧ್ವಜಗಳನ್ನು ಹಿಡಿದು ಉತ್ಸಾಹ–ಉಲ್ಲಾಸ ಮೆರೆದರು.

ಆಜಾದ್‌ ಪಾರ್ಕ್‌ ವೃತ್ತ, ಮಾರುಕಟ್ಟೆ ರಸ್ತೆ, ಕೆ.ಎಂ.ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಅಂಡೇ ಛತ್ರಕ್ಕೆ ವಾಪಸಾಗಿ ಸಮಾಪನಗೊಂಡಿತು. ಮೆರವಣಿಗೆಯುದ್ದಕ್ಕೂ ಪೊಲೀಸ್‌ ಸರ್ಪಗಾವಲು, ಡ್ರೋಣ್‌ ‘ಡ್ರೋಣ್‌’ ಕಣ್ಗಾವಲು ಇತ್ತು. ಮೂರೂವರೆ ಗಂಟೆ ಕಾಲ ಮೆರವಣಿಗೆ ನಡೆಯಿತು.

ನಗರದ ಐಜಿ ರಸ್ತೆ, ಎಂ.ಜಿ.ರಸ್ತೆ ಮೊದಲಾದ ಕಡೆಗಳಲ್ಲಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸ ಲಾಗಿತ್ತು. ವಾಹನ ನಿಲುಗಡೆಗೆ (ಪಾರ್ಕಿಂಗ್‌) ನಿರ್ಬಂಧ ವಿಧಿಸಲಾಗಿತ್ತು. ಪ್ರತಿನಿತ್ಯ ವ್ಯಾಪಾರವಹಿವಾಟು, ವಾಹನ ಸಂಚಾರಗಳಿಂದ ಗಿಜಿಗುಡುತ್ತಿದ್ದ ನಗರದ ಹೃದಯಭಾಗದ ಈ ರಸ್ತೆಗಳು ಶನಿವಾರ ಸ್ಥಬ್ಧವಾಗಿದ್ದವು.

ಈದ್‌ ಮಿಲಾದ್‌ ಮೆರವಣಿಗೆ ಮತ್ತು ದತ್ತ ಜಯಂತಿ ಶೋಭಾಯಾತ್ರೆ ಒಂದೇ ದಿನ ಬಂದಿದ್ದರಿಂದ ಜಿಲ್ಲಾಡಳಿತವು ಬೆಳಿಗ್ಗೆ ಈದ್‌ಮಿಲಾದ್‌ ಮೆರವಣಿಗೆ ಹಾಗೂ ಶೋಭಾಯಾತ್ರೆಗೆ ಮಧ್ಯಾಹ್ನ ಅವಕಾಶ ಕಲ್ಪಿಸಿತ್ತು. ಮೆರವಣಿಗೆ ನಿಮಿತ್ತ ಕಟ್ಟೆಚ್ಚರ ವಹಿಸ ಲಾಗಿತ್ತು. ಮೆರವಣಿಗೆಯಲ್ಲಿ 6,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿ ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT