ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರದಿಂದ ಸಾಗಿದ ಭತ್ತ ಕಟಾವು

Last Updated 4 ಡಿಸೆಂಬರ್ 2017, 5:54 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಭತ್ತದ ಉತ್ತಮ ಫಸಲು ಬಂದಿದೆ. ಯಂತ್ರದ ಮೂಲಕ ಕಟಾವು ಕಾರ್ಯ ಸಾಗಿದೆ. ‘ಯಂತ್ರಗಳನ್ನು ಬಳಿಸುತ್ತಿರುವುದರಿಂದ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಪ್ರತಿ ಗಂಟೆಗೆ ₹2,400ದಂತೆ ತೆಗೆದುಕೊಳ್ಳು

ತ್ತಾರೆ. ಆದರೆ ಕಾಳು ಕಟ್ಟಿದ ಮೇಲೆ ರಸ ಹೀರುವ ಸೊಳ್ಳೆಗಳು ಕಾಣಿಸಿಕೊಂಡಿದ್ದರಿಂದ ಇಳುವರಿ ಗಣನೀಯವಾಗಿ ಕುಸಿತವಾಗಿದೆ. ಸದ್ಯ ಧಾರಣಿ ಪ್ರತಿ ಕ್ವಿಂಟಲ್‌ಗೆ ₹1,380 ಇದೆ’ ಎನ್ನುತ್ತಾರೆ ರೈತ ಶಿವಪ್ಪ.

‘ತ್ವರಿತವಾಗಿ ರಾಶಿ ಮಾಡಿಕೊಂಡು ಬೇಸಿಗೆ ಹಂಗಾಮಿನ ಎರಡನೇಯ ಅವಧಿಗೆ ಭತ್ತ ನಾಟಿ ಮಾಡಲು ಹಿಂದೇಟು ಹಾಕುವಂತಾಗಿದೆ. ವಾರಬಂದಿಯು ಕಟ್ಟುನಿಟ್ಟಾಗಿ ಜಾರಿಯಾದರೆ ಕಾಲುವೆ ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುವುದಿಲ್ಲ.

ಅಲ್ಲದೆ ಭತ್ತವು ನಿಷೇಧಿತ ಬೆಳೆಯಾಗಿದ್ದರಿಂದ ಬೆಳೆ ನಷ್ಟವನ್ನು ನಾವು ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ರೈತ ಅಮರಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈಗಾಗಲೇ ಆಂಧ್ರವಲಸಿಗರು ಎರಡನೇಯ ಅವಧಿಯ ಭತ್ತದ ಲೀಸ್‌ ಮೊತ್ತವನ್ನು ನೀಡಲು ಒಪ್ಪುತ್ತಿಲ್ಲ. ನೀರಿನ ಸಮಸ್ಯೆ ಉಂಟಾಗುವ ಆತಂಕ ಇದ್ದು, ಜಮೀನು ಮಾಲೀಕರು ಕಂಗಾಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT