‘ಸದ್ಯ ಭತ್ತ ಕ್ವಿಂಟಲ್ಗೆ ₹1350 ರಿಂದ ₹1450 ಇದೆ. ವ್ಯಾಪಾರಸ್ಥರು ನಮ್ಮ ಹೊಲಕ್ಕ ಕೀಟ (ದ್ವಾಮಿ) ಹೆಚ್ಚಾಗಿದೆ ಎಂದು ಹೇಳಿದಾಗ, ಅವರು ನೀಡಿದ ಕ್ರಿಮಿನಾಶಕ ಸಿಂಪಡಿಸಿದರೂ ಹುಳ ಸಾಯಲಿಲ್ಲ. ಎಂತಹ ಕ್ರಿಮಿನಾಶಕ ನೀಡಿದ್ದಾರೋ ತಿಳಿಯದು. ಕೀಟಬಾಧೆಯಿಂದ ಬೆಳೆಗಳು ನಾಶವಾಗಿವೆ. ಈಗ ಉತ್ತಮ ಬೆಲೆಯೂ ಸಿಗುತ್ತಿಲ್ಲ. ಬೇಸಾಯಕ್ಕೆ ಖರ್ಚು ಮಾಡಿದ ಹಣವೂ ವಾಪಸಾಗುವ ನಿರೀಕ್ಷೆ ಇಲ್ಲ’ ಎಂದು ರೈತ ಮಾನಶಪ್ಪ ಗುರಿಕಾರ ಹೇಳಿದರು.