ಗಡಿ ಗ್ರಾಮಗಳಾದ ಹುಚ್ಚಂಗಿದುರ್ಗ, ನಾಗಸಮುದ್ರ, ತಮ್ಮೇನಹಳ್ಳಿ, ಬಾಂಡ್ರಾವಿ ಅರಣ್ಯ ಪ್ರದೇಶ ದಾರಿಗಳು, ಪಟ್ಟಣ ಸುತ್ತಮುತ್ತ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಮಾಹಿತಿ ನೀಡಲಾಗಿದೆ. ಕತ್ತಲಾಗಿರುವುದರಿಂದ ಆನೆಗಳು ಬಂದಿರುವುದು ಇನ್ನೂ ಖಚಿತಗೊಂಡಿಲ್ಲ. ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.