ಹಾವೇರಿ: ಅಧಿಕಾರಿಗಳ ವೇತನಕ್ಕೆ ಆಯೋಗ ಇದೆ. ಶಾಸಕರು, ಐಎಎಸ್ ಅಧಿಕಾರಿಗಳು ನಿವೃತ್ತರಾದರೆ ತಿಂಗಳಿಗೆ ₹40ರಿಂದ ₹90 ಸಾವಿರ ಪಿಂಚಣಿ ಇದೆ. ಆದರೆ, ಈ ದೇಶದಲ್ಲಿ ರೈತರ ರಕ್ಷಣೆಗೆ ಇನ್ನೂ ಒಂದು ನೀತಿ ಇಲ್ಲ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು. ನಗರದ ಹೊಸಮಠದಲ್ಲಿ ಭಾನುವಾರ ‘ಶರಣ ಸಂಸ್ಕೃತಿ ಉತ್ಸವ’ದಲ್ಲಿ ಡಾ.ಶಿಮುಶ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.