‘ಬಿಜೆಪಿ ಪಕ್ಷದಿಂದ ಕಾನೂನು ಕಾರ್ಯಾಗಾರ ನಡೆಸಲಿ. ಯಡಿಯೂರಪ್ಪ, ಅನಂತ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಮುಂತಾದವರಿಗೆ ಕಾನೂನಿನ ಅರಿವಿಲ್ಲ. ಬಿಜೆಪಿಯವರು ಹನುಮ ಜಯಂತಿಯನ್ನು ಭಕ್ತಿಯಿಂದ ಮಾಡಿದ್ದಲ್ಲ, ರಾಜಕಾರಣದಿಂದ ಮಾಡಿರುವುದು. ಬಿಜೆಪಿ ಶಾಂತಿ ಕದಡುವ ಕೆಲಸ ಮಾಡಿದೆ. ಅವರ ಉದ್ದೇಶವೇ ಶಾಂತಿ ಕೆಡುವುದು. 2008 ರಿಂದ 2016 ರವರೆಗೆ ದೇಶದಲ್ಲಿ ನಡೆದಿರುವ ಅಪರಾಧಗಳ ಪಟ್ಟಿಯಲ್ಲಿ ಗುಜರಾತ್ ಮೊದಲ ಸ್ಥಾನ’ ಎಂದು ಹೇಳಿದರು.