ನಿಗದಿಪಡಿಸಿದ ಸ್ಥಳದಿಂದ ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ ಆರಂಭಿಸದೆ ಮಧ್ಯಾಹ್ನ 12.30ರ ವರೆಗೆ ವಿಳಂಬ ಮಾಡಿದ ಕಾರಣ ಅಲ್ಲಿ ಜನರ ಗುಂಪು ದೊಡ್ಡದಾಗುತ್ತಾ ಬಂದಿತ್ತು. ಸಾರ್ವಜನಿಕರ ಪ್ರಾಣ, ಆಸ್ತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕನಿಷ್ಠ ಬಲ ಪ್ರಯೋಗಿಸಿ ಗುಂಪನ್ನು ಚದುರಿಸಿದ್ದಾರೆ. ನಿರ್ಬಂಧಿತ ರಸ್ತೆಗಳಲ್ಲಿ ಮೆರವಣಿಗೆ ಮಾಡಬಹುದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಕೆಲವರನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.