ಜಗತ್ತಿನಲ್ಲಿ ಅತಿ ದೊಡ್ಡ ಭಾಷೆ ಇಂಗ್ಲಿಷ್, ಫ್ರೆಂಚ್. ಆದರೆ ಜಗತ್ತಿನ ಅತಿ ದೊಡ್ಡ ಅನುಭಾವ ಸಾಹಿತ್ಯ ವಚನ. ಕನ್ನಡ ಸಾಹಿತ್ಯದ ಕಿರೀಟ ವಚನ ಸಾಹಿತ್ಯ. ಪ್ರತಿಯೊಬ್ಬರೂ ತಮ್ಮ ದುಡಿಮೆಯ ಬೆಲೆಯಲ್ಲಿಯೇ ಊಟ ಮಾಡಬೇಕು. ಜೊತೆಗೆ ಸಮಾಜದಲ್ಲಿ ಜಾತಿ ವೈಶಮ್ಯ ನಿವಾರಣೆಯಾಗಿ ಅಸ್ಪ್ರಶ್ಯತೆ ತೊಲಗಬೇಕು. ಅನುಭಾವ ಮಂಟಪಕ್ಕೆ ಬಂದವರು, ಕಾಶ್ಮೀರದಿಂದ ಕನ್ಯಾಕುಮಾರಿ ಸೇರಿದಂತೆ ಎಲ್ಲ ಕಡೆಯಿಂದ ಬಂದು ಕಲ್ಯಾಣ ಸೇರಬೇಕಾದರೆ ಬಸವಣ್ಣ ಎಂತಹ ಲೋಹಚುಂಬಕ ಶಕ್ತಿ ಹೊಂದಿದ್ದರು. ಕಳ್ಳತನ, ವೇಶ್ಯಾವಾಟಿಕೆ ಒಳಗೊಂಡಂತೆ ಎಲ್ಲ ರೀತಿಯ ವ್ಯಸನಗಳನ್ನು ಬಸವಣ್ಣ ಹೊಡೆದೋಡಿಸಿದರು. ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಿದರು.