‘ಗುಲಾಬಿ ಕಾಯಿಕೊರಕ ನಿವಾರಣೆಗೆ ರೈತರು ಹಲವು ಕೀಟನಾಶಕಗಳನ್ನು ಸಿಂಪರಣೆ ಮಾಡುತ್ತಾ ಬಂದಿದ್ದಾರೆ. ಆದರೆ, ಸಂಪೂರ್ಣವಾಗಿ ನಿರ್ಮೂ ಲನೆ ಆಗಿಲ್ಲ. ಆದರೆ, ಗುಲಾಬಿ ಕಾಯಿ ಕೊರಕದ ಸಂತಾನವನ್ನೇ ನಾಶ ಮಾಡು ವಂತಹ ನಿರ್ವಹಣೆಯೇ ಇದಕ್ಕೆ ಮದ್ದು ಎಂಬುದು ಸಂಶೋಧನೆಯಿಂದ ದೃಢ ಪಟ್ಟಿದೆ. ಹತ್ತಿ ಬೆಳೆ ಕಟಾವು ಆದ ನಂತರ ಹತ್ತಿಗಿಡಗಳನ್ನು ಹೊಲದಲ್ಲಿಯೇ ಬಿಡಬಾರದು. ಅಲ್ಲದೇ ಹತ್ತಿಕಡ್ಡಿಗಳನ್ನು ಸಂಗ್ರಹಿಸಬಾರದು. ಅವುಗಳೊಟ್ಟಿಗೆ ಇರುವ ಗುಲಾಬಿ ಕಾಯಿಕೊರಕ ಕೀಟ ಗಳು ಮುಂದಿನ ಬಿತ್ತನೆ ಸಂದರ್ಭ ದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿಸುತ್ತದೆ. ಆದ್ದರಿಂದ ಕಟಾವು ನಂತರ ಹತ್ತಿಕಡ್ಡಿಯನ್ನು ಬೇರು ಸಹಿತ ನಾಶಪಡಿಸಬೇಕು’ ಎಂದು ವಿವರಿಸಿದರು.