ಅಂಬೇಡ್ಕರರ ಅಂತ್ಯಸಂಸ್ಕಾರಕ್ಕೆ ರಾಜಘಾಟ್ನಲ್ಲಿ ಕಾಂಗ್ರೆಸ್ ಜಾಗ ನೀಡಲಿಲ್ಲ ಎಂದು ಜಿಗಜಿಣಗಿ ಆರೋಪಿಸಿದ್ದಾರೆ. ಆದರೆ, ಅವರ ಅಂತ್ಯಸಂಸ್ಕಾರ ಅವರ ಕರ್ಮಭೂಮಿಯಲ್ಲಿ ನಡೆಯಬೇಕು ಎಂಬ ಬಹುಜನರ ಆಶಯದಂತೆ ನಡೆದಿದೆ. ಜಿಗಜಿಣಗಿ ಹೊರೆಸಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೆಸ್ ಪಕ್ಷದಿಂದ ದಲಿತರ ಉದ್ಧಾರವಾಗಿಲ್ಲ, ಕಾಂಗ್ರೆಸ್ ಪಕ್ಷದಿಂದ ಕೇವಲ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಮಾತ್ರ ಉದ್ಧಾರವಾಗಿದ್ದಾರೆ ಎಂದು ಕಾರಜೋಳ ಹೊರೆಸಿದ ಆರೋಪದಲ್ಲಿಯೂ ಯಾವುದೇ ಹುರುಳಿಲ್ಲ ಎಂದ ಅವರು, ಬಿಜೆಪಿಯಿಂದ ಎಷ್ಟು ಜನ ದಲಿತರು ಉದ್ಧಾರವಾಗಿದ್ದಾರೆ, ಅಲ್ಲಿ ಉದ್ಧಾರವಾದವರು ಜಿಗಜಿಣಗಿ, ಜಿಗಜಿಣಗಿ ಅಳಿಯ, ಕಾರಜೋಳ ಅವರ ಮಕ್ಕಳು ಮಾತ್ರ ಉದ್ಧಾರವಾಗಿದ್ದಾರೆ ಎಂದರು.