ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ ಅವರು, ಸದ್ಯ ಕಡಲೆ ಬೆಳೆ ಹೂವಾಡುವ ಮತ್ತು ಕಾಯಿಕಟ್ಟುವ ಹಂತದಲ್ಲಿದ್ದು , ರೈತರು ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಬೇಕು. ಯೂರಿಯಾ ಇಲ್ಲದ ಮತ್ತು ರಂಜಕ, ಪೊಟಾಷ್ ಇರುವ ಸಿದ್ಧ ರಾಸಾಯನಿಕ ಗೊಬ್ಬರವನ್ನು ಬೆಳೆಗೆ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಪ್ರಮಾಣದಲ್ಲಿ ಬೆರೆಸಿ ತಂಪು ವಾತಾವರಣದಲ್ಲಿ ಸಿಂಪಡಿಸಬೇಕು ಎಂದರು.