ಬೆಂಗಳೂರು: ಸಂಸದ ಪ್ರತಾಪ ಸಿಂಹ ಸ್ವತಃ ಕಾರು ಚಲಾಯಿಸಿ ಬ್ಯಾರಿಕೇಡ್ಗೆ ಗುದ್ದಿಸಿದ್ದು ತಪ್ಪು ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.
ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಚಾಲಕನನ್ನು ಹಿಂದಕ್ಕೆ ಕೂರಿಸಿ, ತಾವೇ ಕಾರು ಚಲಾಯಿಸಿ ಬ್ಯಾರಿಕೇಡ್ ಮೇಲೆ ನುಗ್ಗಿಸುತ್ತಾರೆಂದರೆ ಅದು ತಪ್ಪಲ್ಲವೆ’ ಎಂದರು.
‘ಸರ್ಕಾರ ನನಗೆ ಕಾರ್ ನೀಡಿದೆ. ಅದಕ್ಕೆ ಒಬ್ಬ ಚಾಲಕನನ್ನೂ ನೀಡಿದೆ. ಚಾಲಕನ ಬಿಟ್ಟು ನಾನು ಓಡಿಸುವುದು ತಪ್ಪು’ ಎಂದು ರಮಾ
ನಾಥ ರೈ ಹೇಳಿದರು.
ಜಾರಕಿ ಹೊಳಿ ಅಸಮಾಧಾನ: ಬೆಳಗಾವಿ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂ.ಡಿ.ಲಕ್ಷ್ಮೀನಾರಾಯಣ ಬಗ್ಗೆ ಸತೀಶ್ ಜಾರಕಿಹೊಳಿ ವರಿ
ಷ್ಠರಲ್ಲಿ ಅಸಮಾಧಾನ ತೋಡಿ ಕೊಂಡಿ ದ್ದಾರೆ ಎಂದು ಮೂಲಗಳು ತಿಳಿಸಿವೆ.