‘ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಹೂವು ಸರಬರಾಜು ಮಾಡುವ ನಾರಾಯಣ, ವ್ಯಾಪಾರಿಗಳಿಂದ ಹಣ ಪಡೆದುಕೊಂಡು ಹೋಗಲು ಬಂದಿದ್ದರು. ಕೇಂದ್ರ ಬಸ್ ನಿಲ್ದಾಣದ ಎದುರಿನ ಅಪೋಲೊ ವಸತಿಗೃಹದಲ್ಲಿ ತಂಗಿದ್ದ ಅವರು ಊರಿಗೆ ಮರಳಲೆಂದು ಖಾಸಗಿ ಬಸ್ಸಿಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿಗಳು ಪಲ್ಸರ್ ಬೈಕ್ನಲ್ಲಿ ಬಂದಿದ್ದರು’ ಎಂದು ಮಾಳಮಾರುತಿ ಠಾಣೆ ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರಿಕರ ತಿಳಿಸಿದರು.