‘ಒಂದು ಮಸೀದಿ, ಒಂದು ದೇವಾಲಯ ಕೆಡುವುದರಿಂದ ಯಾರಿಗೂ ನಷ್ಟವಿಲ್ಲ. ನೂರಾರು ಮಂದಿರ–ಮಸೀದಿಗಳು ಇವೆ. ಆದರೆ ಅವುಗಳ ಜತೆ ಜನರಿಗೆ ಭಾವನಾತ್ಮಕ ನಂಟಿದೆ. ಹೀಗಾಗಿ, ಧರ್ಮ ರಾಜಕಾರಣ ನಮ್ಮನ್ನು ಲೂಟಿ ಮಾಡಿದಷ್ಟು ಬೇರಾವುದೂ ಲೂಟಿ ಮಾಡಲಿಲ್ಲ. ಮುಸ್ಲೀಮರು ಇಲ್ಲದ ಕಡೆಯಲ್ಲಿ ಹಿಂದೂಗಳು ಮೊಹರಂ ಆಚರಿಸುತ್ತಿದ್ದಾರೆ. ಇಂಥ ಸಾಮರಸ್ಯವನ್ನು ಹಾಳುಮಾಡಲಾಗುತ್ತಿದೆ’ ಎಂದು ತಿಳಿಸಿದರು.