ಸಮ್ಮೇಳನದಲ್ಲಿ ಏಳು ಗೋಷ್ಠಿಗಳು ನಡೆಯಲಿದ್ದು, ಸ್ಥಳೀಯ ಕೃಷಿ, ನೀರಾವರಿ, ಪರಿಸರ ಸಮಸ್ಯೆ, ಭಾಷೆ, ಶಿಕ್ಷಣ, ಮಾಧ್ಯಮ ಕುರಿತು ಸಂವಾದ ಗೋಷ್ಠಿ ನಡೆಯಲಿವೆ. ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಸಾಧಕರ ಸ್ಮರಣೆ, ರಂಗಭೂಮಿ, ಜಾನಪದ ವೈಭವ, ವರ್ತಮಾನದ ತಲ್ಲಣಗಳು, ಸ್ತ್ರೀ ಸಂವೇದನೆ ಕುರಿತು ರಾಜನೀತಿ ತಜ್ಞರು ಹಾಗೂ ವಿದ್ವಾಂಸರು ಗೋಷ್ಠಿಗಳಲ್ಲಿ ವಿಚಾರ ಮಂಡಿಸಲಿದ್ದಾರೆ ಎಂದರು.