ಕ್ರಷರ್ ನಡೆಸುವುದರಿಂದ ನಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಲು ಸಾಧ್ಯವಾಗುವುದಿಲ್ಲ. ಜಾನುವಾರು, ಕುರಿ, ಮೇಕೆಗಳನ್ನು ಗುಡ್ಡದಲ್ಲಿ ಮೇಯಿಸಲು ಆಗುವುದಿಲ್ಲ. ಪರಿಸರಕ್ಕೂ ಹಾನಿ ಆಗುತ್ತದೆ. ಅಂತರ್ಜಲಕ್ಕೂ ತೊಂದರೆ ಆಗಬಹುದು. ಇದರಿಂದ ನೀರಿನ ಸಮಸ್ಯೆ ಉಂಟಾಗಬಹುದು. ಅಷ್ಟೇ ಅಲ್ಲದೆ ಕಲ್ಲು ಬ್ಲಾಸ್ಟ್ ಮಾಡುವ, ಕ್ರಷರ್ ನಡೆಸುವ ಶಬ್ದದಿಂದ ಸಮೀಪ ಗ್ರಾಮದ ಜನರಿಗೆ ತೊಂದರೆಯಾಗುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿರುವ ತೆಂಗಿನ ತೋಟಕ್ಕೆ ಹಾನಿಯಾದರೆ ಹಲವು ರೈತ ಕುಟುಂಬಗಳು ಬೀದಿ ಪಾಲಾಗಬೇಕಾಗುತ್ತದೆ ಎನ್ನುತ್ತಾರೆ ರೈತ ಗೋವಿಂದಪ್ಪ.