‘ತಾಲ್ಲೂಕಿನ ಬಹುತೇಕ ಗ್ರಾಮ, ತಾಂಡಾ, ದೊಡ್ಡಿ ಪ್ರದೇಶಗಳ ಜನರು ವರ್ಷಪೂರ್ತಿ ಗುಳೆ ಹೋಗುವುದನ್ನು ಹವ್ಯಾಸ ಮಾಡಿಕೊಂಡಂತಾಗಿದೆ. ಉದ್ಯೋಗ ಖಾತ್ರಿ ಚುನಾಯಿತ ಪ್ರತಿನಿಧಿಗಳ ಹಿಂಬಾಲಕರ ಕಪಿಮುಷ್ಠಿಗೆ ಸಿಲುಕಿ ನಿಗದಿತವಾಗಿ ಕೆಲಸ ಸಿಗುತ್ತಿಲ್ಲ. ಕೆಲಸ ಮಾಡಿದವರಿಗೆ ಕೂಲಿ ಹಣ ಪಾವತಿಸುತ್ತಿಲ್ಲ ಹೀಗಾಗಿ ಬಹುತೇಕ ಜನರು ಗುಳೆ ಹೋಗುವುದು ವಾಡಿಕೆಯಾಗಿದೆ’ ಎಂದು ಕೂಲಿಕಾರ ಸಂಘದ ಅಧ್ಯಕ್ಷ ಗುಂಡಪ್ಪ ಹೇಳುತ್ತಾರೆ.