ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರದಲ್ಲಿ ಪಂಚಮುಖಿ ಪರಮೇಶ್ವರ ಮೂರ್ತಿಯಾತ್ರೆ

Last Updated 7 ಡಿಸೆಂಬರ್ 2017, 11:10 IST
ಅಕ್ಷರ ಗಾತ್ರ

ಅಫಜಲಪುರ: ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಕಲಬುರ್ಗಿಯಿಂದ ಬಂದಿರುವ ನಿರಗುಡಿ ಮಲ್ಲಯ್ಯನವರ ಪಂಚಮುಖಿ ಪರಮೇಶ್ವರ ಮೂರ್ತಿಯಾತ್ರೆಯಲ್ಲಿ ಸಹಸ್ರಾರು ಭಕ್ತರು ಬುಧವಾರ ದರ್ಶನ ಪಡೆದರು.

ಮಹಾರಾಷ್ಟ್ರ ಕರ್ನಾಟಕದಲ್ಲಿ ಪಂಚಮುಖಿ ಪರಮೇಶ್ವರ ಮೂರ್ತಿಯಾತ್ರೆ ಆರಂಭಗೊಂಡಿದ್ದು, ಅಫಜಲಪುರದಲ್ಲಿ ಪ್ರಮುಖ ಸ್ಥಳಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಶಾಲಾ ಮಕ್ಕಳು ಭಾಗವಹಿಸಿದ್ದರು.

ಯಾತ್ರೆ ಕುರಿತು ಪಟ್ಟಣದ ಸೂರ್ಯಕಾಂತ ನಾಕೇದಾರ ಅವರು ಮಾಹಿತಿ ನೀಡಿ, ‘ಇದು ಸರ್ವ ಸಮಾಜ ಒಳಿತು ಬಯಸುವ ಯಾತ್ರೆಯಾಗಿದೆ. ಪಂಚಮುಖಿ ಪರಮೇಶ್ವರ ಮೂರ್ತಿ ಭಕ್ತರಿಗೆ ದರ್ಶನವಾಗಿರುವುದು ಒಳ್ಳೆಯ ಸಂಗತಿಯಾಗಿದೆ’ ಎಂದರು.

ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ವಿವಿಧ ವಿಭಾಗದ ಮುಖ್ಯಸ್ಥರಾದ ಈಶ್ವರಪ್ಪ ಅಂಜುಟಗಿ, ಮಲ್ಲಯ್ಯ ಕರಬಂಟನಾಳ, ದೈಹಿಕ ನಿರ್ದೇಶಕ ಚಿದಾನಂದ ಹಿರೇಮಠ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT