ಕಾಸರಗೋಡು: ಬಾಬರಿ ಮಸೀದಿ ಧ್ವಂಸದ ಕರಾಳ ದಿನ ಆಚರಣೆ ವೇಳೆ ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳಲ್ಲಿ ಕಿಡಿಗೇಡಿಗಳು ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ.
ಇದನ್ನು ಖಂಡಿಸಿ ಗುರುವಾರ ಕಾಸರಗೋಡು- ತಲಪಾಡಿ ಹೆದ್ದಾರಿ ಹಾಗೂ ಕುಂಬಳೆ -ಬದಿಯಡ್ಕ -ಮುಳ್ಳೇರಿಯ ಮಾರ್ಗದಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.
ಕಲ್ಲು ತೂರಾಟದಿಂದ ಬಸ್ ಚಾಲಕ ಹೃತೇಶ್ ಎಂಬವರ ಕಣ್ಣಿಗೆ ತೀವ್ರ ಗಾಯವಾಗಿದೆ. ಈ ಸಂಬಂಧ ಕೂಡ್ಲುವಿನ ಇಂಜಮಾಮ್, ಮುಹಮ್ಮದ್ ಅಜ್ಮಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.