ಶನಿ ದೇವಸ್ಥಾನದ ಸಮೀಪ ಆರಂಭವಾದ ಹಿಂಸಾಚಾರ ಬಳಿಕ ಪಟ್ಟಣದ ಉಳಿದ ಭಾಗಗಳಿಗೂ ವ್ಯಾಪಿಸಿತು. ಹಲವು ಅಂಗಡಿಗಳ ಮೇಲೆ ಕಲ್ಲು ತೂರಲಾಯಿತು. ಉದ್ರಿಕ್ತರು ಟೆಂಪೊ, ಬಸ್ಗಳ ಗಾಜು ಒಡೆದು ದಾರಿಹೋಕರ ಮೇಲೆಯೂ ಹಲ್ಲೆ ನಡೆಸಿದರು. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ಹಿಂದೂ ಯುವಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.