ಭಾನುವಾರ ಬೆಳಿಗ್ಗೆ 7 ಗಂಟೆಗೆ ಬಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಶ್ರೀಕೃಷ್ಣನ್ ಆನೆ ಮಾವುತನ ಮೇಲೆ ಎರಗಿತು. ಇದರಿಂದ ಉಂಟಾದ ಗದ್ದಲದಿಂದಾಗಿ ಉಳಿದೆರಡು ಆನೆಗಳೂ ಹುಚ್ಚೆದ್ದು ಓಡಲು ಆರಂಭಿಸಿದವು. ಒಂದು ಆನೆಯು ತನ್ನ ಮೇಲೆ ದೇವರ ಮೂರ್ತಿಯನ್ನು ಹಿಡಿದು ಕುಳಿತಿದ್ದ ಅರ್ಚಕರನ್ನು ನೆಲಕ್ಕೆ ಎಸೆಯಿತು. ಒಂದು ಆನೆ ದೇವಾಲಯ ಸಂಕೀರ್ಣದಿಂದ ಹೊರಗೆ ಓಡಿತು.