‘ಅಂಗವಿಕಲರ ಮನೆಗಳಿಗೆ ಉಚಿತವಾಗಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಅಂಗವಿಕಲರ ಶ್ರೇಯೋಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇಲಾಖೆವಾರು ಪ್ರಚಾರಪಡಿಸಬೇಕು. ಅವರಿಗೆ ನಿರುದ್ಯೋಗ ಭತ್ಯೆ ಕಲ್ಪಿಸಬೇಕು. ಆರ್ಥಿಕವಾಗಿ ಸಬಲೀಕರಣ ಹೊಂದಲು ಸಾಲಸೌಲಭ್ಯ ನೀಡಬೇಕು’ ಎಂದು ಆಗ್ರಹಿಸಿದರು. ಅಂಗವಿಕಲರಾದ ಚಾಗನೂರು ನಾಗರಾಜ, ಅಡಿವೆಮ್ಮ, ಭಾಗ್ಯಮ್ಮ, ಲಕ್ಷ್ಮೀ, ರುದ್ರವೇಣಿ, ಶಿರವಾರ ಗ್ಯಾನಪ್ಪ, ರಾಮನಾಯಕ ಇದ್ದರು.