ಸಿಪಿಐ ತಾಲ್ಲೂಕು ಅಧ್ಯಕ್ಷ ಜಾಫರ್ ಷರೀಫ್ ಮಾತನಾಡಿ, ಡಿ. 27, 28 ರಂದು ಮೊಳಕಾಲ್ಮುರಿನಲ್ಲಿ ಸಿಪಿಐ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹೇಳಿದರು. ಎಐಕೆಎಸ್ ತಾಲ್ಲೂಕು ಅಧ್ಯಕ್ಷ ಡಿ. ಪೆನ್ನಯ್ಯ, ಅಂಗನವಾಡಿ ಫೆಡರೇಷನ್ ತಾಲ್ಲೂಕು ಅಧ್ಯಕ್ಷೆ ಅರವಿಂದ ಬಾಯಿ, ಕಾರ್ಯದರ್ಶಿ ನಾಗರತ್ನಮ್ಮ, ಸಿಪಿಐನ ಕೆ.ಟಿ. ನಾಗರಾಜ್, ಅಮಕುಂದಿ ಈರಣ್ಣ, ವೀರೇಶ್, ಓಬಣ್ಣ, ಕಾಮಯ್ಯ, ಮುತ್ತಯ್ಯ, ಮಾಣಿಕ್ಯ ಅವರೂ ಉಪಸ್ಥಿತರಿದ್ದರು.