ರಾಜಕಾರಣಿಗಳ ಅಪರಾಧ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಸಿದ್ಧ ಎಂದು ಇದೇ 8ರಂದು ಹಣಕಾಸು ಸಚಿವಾಲಯ ತಾತ್ವಿಕ ಒಪ್ಪಿಗೆ ನೀಡಿತ್ತು. ಈ ನ್ಯಾಯಾಲಯಗಳ ಸ್ಥಾಪನೆಗೆ ₹7.80 ಕೋಟಿ ವೆಚ್ಚವಾಗಲಿದೆ ಎಂದು ಸಚಿವಾಲಯ ಹೇಳಿದೆ. ತ್ವರಿತಗತಿ ನ್ಯಾಯಾಲಯಗಳ ರೀತಿ ರಾಜಕಾರಣಿಗಳ ಅಪರಾಧ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಆರಂಭಿಸುವ ಮೂಲಕ ರಾಜಕಾರಣದ ಅಪರಾಧೀಕರಣ ತಡೆ ಸಾಧ್ಯವಿದೆ ಎಂದು ನ. 1ರಂದು ಸುಪ್ರೀಂ ಕೋರ್ಟ್ ಹೇಳಿತ್ತು. ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರ ಅರ್ಜಿ ವಿಚಾರಣೆ ವೇಳೆ ಹೀಗೆ ಹೇಳಲಾಗಿತ್ತು.