ಹೆಬ್ಬಾಳದಲ್ಲಿರುವ ರೆಸ್ಟೋರೆಂಟ್ವೊಂದರ ಮಾಲೀಕರು ನೀರಿನ ಬಾಟಲಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಈ ಬಗ್ಗೆ, ರೆಸ್ಟೋರೆಂಟ್ಗೆ ಇಲಾಖೆ ನೋಟಿಸ್ ನೀಡಿತ್ತು. ನಂತರ, ಕ್ರಮ ಕೈಗೊಳ್ಳದಿರಲು ₹ 20 ಸಾವಿರ ಲಂಚ ನೀಡಬೇಕು ಎಂದು ಒತ್ತಾಯಿಸಿದ ಕುಮಾರ್, ಮುಂಗಡವಾಗಿ ₹ 3 ಸಾವಿರ ಪಡೆದಿದ್ದರು. ಸೋಮವಾರ ಬಾಕಿ ಹಣವನ್ನು ಅರ್ಜಿದಾರರಿಂದ ಪಡೆಯುತ್ತಿದ್ದ ವೇಳೆ ಎಸಿಬಿ ಪೊಲೀಸರು ದಾಳಿ ನಡೆಸಿದ್ದರು.