ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟೀಹಳ್ಳಿ ತಾಲ್ಲೂಕು ಅಸ್ತಿತ್ವಕ್ಕೆ ಕ್ಷಣಗಣನೆ

Last Updated 13 ಡಿಸೆಂಬರ್ 2017, 10:26 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ರಾಜ್ಯ ಸರ್ಕಾರವು ಒಟ್ಟು 50 ಹೊಸ ತಾಲ್ಲೂಕುಗಳನ್ನು ಘೋಷಿಸಿದ್ದು, ಈ ಪೈಕಿ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಗೆ ಭಾಗ್ಯ ಒಲಿದು ಬಂದಿದೆ. 2018ರ ಜನವರಿ 1ರಿಂದ ಕಾರ್ಯರೂಪಕ್ಕೆ ಬರಲಿದ್ದು, ಈ ಭಾಗದ ಜನರಲ್ಲಿ ಉತ್ಸಾಹ ಮೂಡಿಸಿದೆ.

ನೂತನ ತಾಲ್ಲೂಕು ರಚನೆಗೆ ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ನಡೆಸಿದ್ದು, ಇಲ್ಲಿನ ತುಂಗಾ ಮೇಲ್ದಂಡೆ ಯೋಜನೆಯ ಕಚೇರಿಯ ಹಳೇ ಕಟ್ಟಡದ 36 ಕೊಠಡಿಗಳನ್ನು ಗುರುತಿಸಿದೆ. ಅವುಗಳನ್ನು ದುರಸ್ತಿ ಮಾಡಿ ಸುಣ್ಣ–ಬಣ್ಣ ಬಳಿಯ ಬೇಕಾಗಿದೆ.

ರಟ್ಟೀಹಳ್ಳಿ ನೂತನ ತಾಲ್ಲೂಕಿಗೆ ರಾಣೆಬೆನ್ನೂರು ಹಾಗೂ ಶಿಕಾರಿಪುರ ತಾಲ್ಲೂಕಿನ ಕೆಲ ಗ್ರಾಮಗಳನ್ನು ಸೇರ್ಪಡೆ ಮಾಡುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ, ಅಲ್ಲಿನ ಜನರು ಒಲವು ತೋರದ ಕಾರಣ ಹಿರೇಕೆರೂರ ತಾಲ್ಲೂಕಿನ 63 ಗ್ರಾಮಗಳನ್ನು ಮಾತ್ರ ಗುರುತಿಸಲಾಗಿದೆ. ಹೀಗಾಗಿ ಒಟ್ಟು 20 ಗ್ರಾಮ ಪಂಚಾಯ್ತಿಗಳನ್ನು ಒಳಗೊಳ್ಳಲಿದ್ದು, ಯಾವುದೇ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಲ್ಲ. ಒಟ್ಟು 1.10 ಲಕ್ಷಕ್ಕೂ ಅಧಿಕ (2011 ಜನಗಣತಿ) ಜನಸಂಖ್ಯೆ ಹೊಂದಲಿದೆ.

ಪ್ರಮುಖ ಸ್ಥಳಗಳು: ರಟ್ಟೀಹಳ್ಳಿಯ ಕದಂಬೇಶ್ವರ ದೇವಸ್ಥಾನ, ಕಬ್ಬಿಣಕಂತಿಮಠ, ಕಣವಿಸಿದ್ಗೇರಿಯ ಸಿದ್ದೇಶ್ವರ ದೇವಸ್ಥಾನ, ಸರ್ವಜ್ಞನ ಸಮಾಧಿ ಸ್ಥಳ, ಕೆಂಚಮ್ಮಳ ಕೆರೆ, ತಿಪ್ಪಾಯಿಕೊಪ್ಪದ ಮೂಕಪ್ಪಸ್ವಾಮಿ ಮಠ, ಸತ್ತಗೀಹಳ್ಳಿಯ ಸರ್ವದೇವರ ಆಲಯ, ಬುಳ್ಳಾಪುರ ದುರ್ಗಾದೇವಿ ದೇವಸ್ಥಾನ, ಗುಡ್ಡದಮಾದಾಪುರದ ಕರಡಿಕೊಳ್ಳ ಸಿದ್ದೇಶ್ವರ ದೇವಸ್ಥಾನ, ಗುಂಡಗಟ್ಟಿಯ ಶನಿ ದೇವಾಲಯ ಹಾಗೂ ಭಗವತಿ ಕೆರೆ ತಾಲ್ಲೂಕು ಒಳಗೊಳ್ಳುವ ಪ್ರಮುಖ ಸ್ಥಳಗಳಾಗಿವೆ.

63 ಗ್ರಾಮಗಳು: ನೂತನ ತಾಲ್ಲೂಕಿನಲ್ಲಿ ರಟ್ಟೀಹಳ್ಳಿ, ತೋಟಗಂಟಿ, ಕಡೂರ, ಬುಳ್ಳಾಪುರ, ಹಾಡೇ, ಸಣ್ಣಗುಬ್ಬಿ, ಹಿರೇಮಾದಾಪುರ, ಕುಡಪಲಿ, ಯಡಗೋಡ, ದೊಡ್ಡಗುಬ್ಬಿ, ಬಡಾಸಂಗಾಪುರ, ನೆಸ್ವಿ, ಮಾವಿನತೋಪ, ಮಕರಿ, ಕುಂಚೂರ, ತಿಮಲಾಪುರ, ಕೋಡಿಹಳ್ಳಿ, ಲಿಂಗದೇವರಕೊಪ್ಪ, ಚಿಕ್ಕಯಡಚಿ, ಹಿರೇಯಡಚಿ, ಕ್ಯಾತನಕೇರಿ, ಹುಲ್ಲತ್ತಿ, ಶಿರಗಂಬಿ, ಸತ್ತಿಗೀಹಳ್ಳಿ, ಹಿರೇಮೊರಬ, ಚಿಕ್ಕಮೊರಬ, ಯಲಿವಾಳ, ಚಪ್ಪರದಹಳ್ಳಿ, ರಾಮತೀರ್ಥ, ಖಂಡೀಬಾಗೂರ, ಮಾಸೂರ, ತಿಪ್ಪಾಯಿಕೊಪ್ಪ, ಕೋಡಮಗ್ಗಿ, ಯತ್ತಿನಹಳ್ಳಿ, ಗಂಗಾಯಿಕೊಪ್ಪ, ಮೇದೂರ, ಹೊಸಕಟ್ಟಿ, ಅಂಗರಗಟ್ಟಿ, ಹಳಿಯಾಳ, ತಡಕನಹಳ್ಳಿ, ಚಿಕ್ಕಕಬ್ಬಾರ, ಹಿರೇಕಬ್ಬಾರ, ಗಲಗಿನಕಟ್ಟಿ, ಹಳ್ಳೂರ, ಅಣಜಿ, ನಾಗವಂದ, ಗುಡ್ಡದಮಾದಾಪುರ, ಕಮಲಾಪುರ, ಪುರದಕೇರಿ, ಚಟ್ಟನಹಳ್ಳಿ, ಕೆಂಚಾಯಿಕೊಪ್ಪ, ಬತ್ತಿಕೊಪ್ಪ, ಮಳಗಿ, ಇಂಗಳಗೊಂದಿ, ಗುಂಡಗಟ್ಟಿ, ಹಿರೇಮತ್ತೂರ, ಮೈದೂರ, ಶಂಕರನಹಳ್ಳಿ, ಕಣವಿಸಿದ್ಗೇರಿ, ಪರ್ವಸಿದ್ಗೇರಿ, ಜೋಕನಹಾಳ, ಗುಂಡಗಟ್ಟಿ ಹಾಗೂ ಹೊಸಳ್ಳಿ ಸೇರ್ಪಡೆಯಾಗಿವೆ.

* * 

ರಟ್ಟೀಹಳ್ಳಿ ತಾಲ್ಲೂಕು ಆಡಳಿತಕ್ಕೆ ಗ್ರಾಮದಲ್ಲಿನ ತುಂಗಾ ಮೇಲ್ದಂಡೆ ಯೋಜನೆಯ ಹಳೇಯ ಕಟ್ಟಡವನ್ನು ಜಿಲ್ಲಾಡಳಿತ ಗುರುತಿಸಿದೆ. ಸರ್ಕಾರದಿಂದ ಅನುಮತಿ ಬಂದ ತಕ್ಷಣ ದುರಸ್ತಿ ಮಾಡಿಸಲಾಗುವುದು
ಎ.ವಿ.ಶಿಗ್ಗಾವಿ
ತಹಶೀಲ್ದಾರ್‌, ಹಿರೇಕೆರೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT