ಲಂಡನ್: ಭಾರತದಲ್ಲಿರುವ ಜೈಲುಗಳು ದಟ್ಟಣೆಯಿಂದ ಕೂಡಿದ್ದು, ಅಲ್ಲಿ ನೈರ್ಮಲ್ಯದ ಕೊರತೆ ಇದೆ ಎಂದು ಉದ್ಯಮಿ ವಿಜಯ್ ಮಲ್ಯ ಅವರ ಪರ ವಕೀಲರು ಗುರುವಾರ ವಾದ ಮಂಡಿಸಿದರು. ಈ ಮೂಲಕ ಮಲ್ಯ ಹಸ್ತಾಂತರಕ್ಕೆ ಬೇಡಿಕೆ ಇಟ್ಟಿರುವ ಭಾರತಕ್ಕೆ ತಿರುಗೇಟು ನೀಡಿದರು.
ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಕಾರಾಗೃಹಗಳ ಸಲಹೆಗಾರ ಡಾ. ಅಲಾನ್ ಮಿಶೆಲ್ ಅವರು ವಾದ ಮಂಡಿಸಿದರು. ಮುಂಬೈನ ಆರ್ಥರ್ ರಸ್ತೆ ಜೈಲಿನ ಸ್ಥಿತಿ ತೃಪ್ತಿಕರವಾಗಿಲ್ಲ ಎಂದ ಅವರು ಕೋಲ್ಕತ್ತದ ಅಲಿಪೊರ್ ಹಾಗೂ ಚೆನ್ನೈನ ಜೈಲುಗಳ ದುಸ್ಥಿತಿಯನ್ನೂ ವಿವರಿಸಿದರು.