ರಾಸಾಯನಿಕ ಕೃಷಿಯನ್ನು, ಅದರ ಹಿಂದಿರುವ ಟೊಳ್ಳು ವಿಜ್ಞಾನವನ್ನು ಧಿಕ್ಕರಿಸಿ, ಸಾವಯವ ಕೃಷಿಗೆ ಮಾದರಿ ಎನ್ನುವಂತೆ ಬದುಕು ನಡೆಸುತ್ತಿರುವವರು ಡಾ. ನಾರಾಯಣ ರೆಡ್ಡಿ. ದೊಡ್ಡಬಳ್ಳಾಪುರ ತಾಲ್ಲೂಕು ಸೋರಹುಣಸೆ ಗ್ರಾಮದ ಅವರು ಓದಿದ್ದು 2ನೇ ತರಗತಿ. ಆದರೆ ರೆಡ್ಡಿಯವರ ತೋಟ, ಮನೆ ಹಾಗೂ ಪರಿಶ್ರಮ ಸಾವಯವ ಕೃಷಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗುರುಕುಲವೆಂದೇ ಗುರುತಿಸಲ್ಪಟ್ಟಿದೆ.