‘ಬೆಲೆ ಕುಸಿತದಿಂದಾಗಿ ಬರುವ ದರವು ಸಾಗಣೆಯ ಬಾಡಿಗೆಗೂ ಸಾಲುವುದಿಲ್ಲ. ನಮ್ಮ ಶ್ರಮ ವ್ಯರ್ಥವಾಗುತ್ತಿದೆ. ಬೆಲೆ ಇಳಿಕೆ ಸಂದರ್ಭದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ನಿಗದಿ ಮಾಡಬೇಕು. ಸಾಲ ಮಾಡಿ ಟೊಮೆಟೊ ಬೆಳೆದಿದ್ದು, ಸಾಲ ತೀರಿಸಲು ಏನು ಮಾಡುವುದೆಂದು ತಿಳಿಯುತ್ತಿಲ್ಲ’ ಎಂದು ರಾಘವಪುರ ಗ್ರಾಮದ ರೈತ ದೇವಯ್ಯ ನೋವು ತೋಡಿಕೊಂಡರು.