‘ಶಹಾಪುರ ವಿಧಾನಭಾ ಕ್ಷೇತ್ರದ ಯಕ್ತಾಪುರ, ತಳ್ಳಳ್ಳಿ, ದೇವನಾಳ, ಚಿಂಚೋಳಿ, ವಂದಗನೂರು, ಹೂವಿನಳ್ಳಿ, ಐನಾಪುರ, ಮಲ್ಕಾಪುರ, ಕಾಚಾಪುರ, ಆಲ್ದಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ. ಈ ಏತ ನೀರಾವರಿ ಯೋಜನೆಯಡಿ ಗ್ರಾಮಗಳು ಸೇರ್ಪಡೆಯಾದರೆ ರೈತರ ಬದುಕು ಹಸನಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕೆಬಿಜೆಎನ್ಎಲ್ ನಿಗಮ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.