ಬೆಂಗಳೂರು: ರೈತರ ಮತ್ತು ಹಳ್ಳಿಗಾಡಿನ ಜನರ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ನ ಹೊಸ ಕಚೇರಿಯ ಉದ್ಘಾಟನೆಯು ಹೋಮ, ಹವನ, ಪೂಜೆಗಳೊಂದಿಗೆ ವಿಧ್ಯುಕ್ತವಾಗಿ ನಡೆದದ್ದು ಎಲ್ಲರಿಗೂ ಗೊತ್ತಿರುವಂಥದ್ದೇ. ‘ದೊಡ್ಡ ಗೌಡರು’ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಕುಮಾರಣ್ಣ ರಾಜ್ಯಕ್ಕೆ ಅಧ್ಯಕ್ಷರು. ಆದರೆ, ಪಕ್ಷದ ಕಚೇರಿ ಜೆ.ಪಿ. ಸದನಕ್ಕೆ ಮಾತ್ರ ಎಚ್.ಡಿ.ರೇವಣ್ಣ ಅವರೇ ಬಿಗ್ಬಾಸ್. ಅವರದ್ದೇ ಪೂರ್ಣ ಹಿಡಿತ. ಹೀಗಾಗಿ ದೂರದ ಊರುಗಳಿಂದ ಬರುವ ಕಾರ್ಯಕರ್ತರಿಗೆ ಬಿಸಿ ಬೇಳೆಬಾತ್, ಮೊಸರನ್ನ, ಪಲಾವ್ ಬಿಟ್ಟರೆ ಬೇರೇನೂ ಇಲ್ಲ. ಈಚೆಗೆ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಗೋಡಂಬಿ, ಬಿಸ್ಕತ್ ನೀಡಲಾಗಿತ್ತು. ‘ಏನ್ ಸಾರ್ ಗೋಡಂಬಿ, ಬಿಸ್ಕತ್ ಬಿಟ್ಟು ಚಿಕನ್ ಬಿರಿಯಾನಿ ಹಾಕಿಸಿ’ ಎಂದು ಮಾಧ್ಯಮದ
ಪ್ರತಿನಿಧಿಯೊಬ್ಬರು ಪಕ್ಷದ ನಾಯಕರೊಬ್ಬರ ಕಾಲೆಳೆದರು.