ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆಗೂ ಎಂಟ್ರಿ ಇಲ್ಲ!

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರೈತರ ಮತ್ತು ಹಳ್ಳಿಗಾಡಿನ ಜನರ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್‌ನ ಹೊಸ ಕಚೇರಿಯ ಉದ್ಘಾಟನೆಯು ಹೋಮ, ಹವನ, ಪೂಜೆಗಳೊಂದಿಗೆ ವಿಧ್ಯುಕ್ತವಾಗಿ ನಡೆದದ್ದು ಎಲ್ಲರಿಗೂ ಗೊತ್ತಿರುವಂಥದ್ದೇ. ‘ದೊಡ್ಡ ಗೌಡರು’ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಕುಮಾರಣ್ಣ ರಾಜ್ಯಕ್ಕೆ ಅಧ್ಯಕ್ಷರು. ಆದರೆ, ಪಕ್ಷದ ಕಚೇರಿ ಜೆ.ಪಿ. ಸದನಕ್ಕೆ ಮಾತ್ರ ಎಚ್‌.ಡಿ.ರೇವಣ್ಣ ಅವರೇ ಬಿಗ್‌ಬಾಸ್‌. ಅವರದ್ದೇ ಪೂರ್ಣ ಹಿಡಿತ. ಹೀಗಾಗಿ ದೂರದ ಊರುಗಳಿಂದ ಬರುವ ಕಾರ್ಯಕರ್ತರಿಗೆ ಬಿಸಿ ಬೇಳೆಬಾತ್‌, ಮೊಸರನ್ನ, ಪಲಾವ್‌ ಬಿಟ್ಟರೆ ಬೇರೇನೂ ಇಲ್ಲ. ಈಚೆಗೆ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಗೋಡಂಬಿ, ಬಿಸ್ಕತ್‌ ನೀಡಲಾಗಿತ್ತು. ‘ಏನ್‌ ಸಾರ್‌ ಗೋಡಂಬಿ, ಬಿಸ್ಕತ್‌ ಬಿಟ್ಟು ಚಿಕನ್‌ ಬಿರಿಯಾನಿ ಹಾಕಿಸಿ’ ಎಂದು ಮಾಧ್ಯಮದ
ಪ್ರತಿನಿಧಿಯೊಬ್ಬರು ಪಕ್ಷದ ನಾಯಕರೊಬ್ಬರ ಕಾಲೆಳೆದರು.

‘ಅಯ್ಯೊ ಬಿರಿಯಾನಿ ಮಾತು ಹಾಗಿರಲಿ, ಅಪ್ಪಿತಪ್ಪಿ ಮೊಟ್ಟೆಯನ್ನೂ ತರುವಂತಿಲ್ಲ. ಎಲ್ಲ ರೇವಣ್ಣ ಅವರದ್ದೇ ಕಂಟ್ರೋಲ್‌ ಸ್ವಾಮಿ’ ಎಂದು ಜೋರಾಗಿ ನಕ್ಕು ಜಾಗ ಖಾಲಿ ಮಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT