ಶುಕ್ರವಾರ ಪತ್ರಿಕೆಗೆ ಮಾಹಿತಿ ನೀಡಿದ ಕೃಷಿಕರು, ‘ಯಂತ್ರಧಾರೆ ಅಜೆಕಾರು ಘಟಕದ ಅಧಿಕಾರಿಗಳನ್ನು ಪ್ರಶ್ನಿಸಿದರೂ ನಮಗೆ ಸರಿಯಾಗಿ ಸ್ಪಂದಿಸಿಲ್ಲ, ತೆಗೆದಿರಿಸಿದ ನೇಜಿ ಹಾಳಾಗಿದೆ. ಕಾದು ಕಾದು ಮತ್ತೇ ನಾವೇ ಕೈ ನಾಟಿ ಮಾಡಿದ್ದೇವೆ. ರಾಜ್ಯ ಸರ್ಕಾರ ರೈತರಿಗೆ ಅತ್ಯುತ್ತಮವಾಗಿ ಪ್ರಯೋಜನಕ್ಕೆ ಬರಲಿ ಎಂದು ಯೋಜನೆ ರೂಪಿಸಿದರೇ ಅಧಿಕಾರಿಗಳು ಮತ್ತು ಏಜೆನ್ಸಿಯವರು ಅಸಡ್ಡೆ ತೋರಿ ಕೃಷಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ದೂರಿದ್ದಾರೆ.