ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಅವಶ್ಯ

Last Updated 17 ಡಿಸೆಂಬರ್ 2017, 8:40 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆಯಿದೆ’ ಎಂದು ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚಿಲಕಲನೇರ್ಪು ಹೋಬಳಿಯ ಬುರುಡುಗಂಟೆ ಗ್ರಾಮದಲ್ಲಿ ಶನಿವಾರ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೆ.ಡಿ.ಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ 330 ಗರ್ಭಿಣಿಯರಿಗೆ ತಲಾ ₹ 10 ಸಾವಿರ ಸಹಾಯ ಧನ ವಿತರಣೆ ಹಾಗೂ ಉಚಿತ ಆಂಬುಲನ್ಸ್ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುಮಾರಪರ್ವ ಪ್ರಾರಂಭವಾಗಲಿ ಮತ್ತು ರಾಜ್ಯ ಸರ್ವತೋಮುಖ ಬೆಳವಣಿಗೆ ಕಾಣಲಿ ಎಂಬ ಉದ್ದೇಶದಿಂದ ಗರ್ಭಿಣಿಯರಿಗೆ ಸಹಾಯಧನ ನೀಡುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದೇವೆ’ ಎಂದರು. ‘ಚಿಲಕಲನೇರ್ಪು ಹೋಬಳಿಯ ಮುಖಂಡರ ನೆರವಿನಿಂದ ಅತ್ಯಲ್ಪ ಕಾಲದಲ್ಲಿಯೇ ಉತ್ತಮ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಆಯೋಜಿಸಲು ಸಾಧ್ಯವಾಯಿತು’ ಎಂದರು.

‘ಸರ್ಕಾರ ನೀಡುವ ಸಹಾಯ ತಾಯಂದಿರಿಗೆ ಸಾಲದು ಹಾಗಾಗಿ ಟ್ರಸ್ಟ್ ವತಿಯಿಂದ ₹ 10 ಸಾವಿರ ನೀಡುತ್ತಿದ್ದೇವೆ. ನಾಲ್ಕೂ ಹೋಬಳಿಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು’ ಎಂದರು.

‘ಮನೆ ಮನೆಗೆ ಕುಮಾರಣ್ಣ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ದೇವೇಗೌಡರ ಮತ್ತು ಕುಮಾರಣ್ಣ ಜನಸೇವೆ ಹಾಗೂ ಜನಪರ ಚಿಂತನೆಗಳನ್ನು ಜನರಿಗೆ ತಲುಪಿಸುವ ಆಶಯದೊಂದಿಗೆ ಕರಪತ್ರವನ್ನು ಉದ್ಘಾಟಿಸುತ್ತಿದ್ದೇವೆ’ ಎಂದರು.

‘ರೈತಪರ, ಜನಪರ, ಬಡವರಪರ ಚಿಂತನೆಯುಳ್ಳವರು ನಾಯಕರಾದರೆ ರಾಜ್ಯ ಮುಂದುವರೆಯುತ್ತದೆ. ತಮ್ಮ 20 ತಿಂಗಳ ಕಾಲಾವಧಿಯಲ್ಲಿ ಅನೇಕ ರೈತಪರ, ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು’ ಎಂದು ತಿಳಿಸಿದರು. ‘ರೈತಾಪಿ ವರ್ಗದವರ ಹಾಗೂ ಜೀವಪರ ಚಿಂತಕರಾದ ಕುಮಾರಣ್ಣನವರನ್ನು ಬಲಪಡಿಸಿ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡುವ ಈ ನಮ್ಮ ಜೀವಪರ ನಡಿಗೆಯಲ್ಲಿ ಎಲ್ಲರೂ ಕೈಜೋಡಿಸಿ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ‘ಪಕ್ಷದ ಮುಖಂಡರ ತೀರ್ಮಾನದಂತೆ ನಡೆದುಕೊಳ್ಳಲು ಎಲ್ಲರೂ ಬದ್ಧವಾಗಿದ್ದೇವೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರಿಗೆ ಬೆಂಬಲವಾಗಿ ನಿಂತು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ’ ತಿಳಿಸಿದರು.

ಜೆ.ಡಿ.ಎಸ್ ವಕ್ತಾರ ಎಸ್.ಬಿ. ಶ್ರೀನಿವಾಸ್ ಮಾತನಾಡಿ, ‘ಪಕ್ಷವನ್ನು ಸಂಘಟನೆ ಮಾಡುತ್ತಾ ಈ ಭಾಗದ ಜನರಿಗೆ ನೆರವಾಗುತ್ತಿರುವ ಬಿ.ಎನ್.ರವಿಕುಮಾರ್ ಅವರ ಜನಪರ ಆಲೋಚನೆ ಶ್ಲಾಘನೀಯ’ ಎಂದರು.

ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಡಿ.ಸಿ.ಸಿ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ಮುಖಂಡರಾದ ಯರ್ರಬಚ್ಚಪ್ಪ, ತಾದೂರು ರಘು, ಆದಿಲ್ ಪಾಷ, ತುಳುವನೂರು ರವಿ, ಆರ್.ಎ.ಉಮೇಶ್, ಕೆ.ಎಸ್.ಮಂಜುನಾಥ್, ಧರ್ಮೇಂದ್ರ, ಕದಿರಿ ಯೂಸುಫ್, ಸೆಮಿ, ಸೆಮೀವುಲ್ಲ, ಸಯ್ಯದ್ ಮಹಮ್ಮದ್, ಶ್ರೀನಿವಾಸಗೌಡ, ಗೊರಮಡುಗು ನಂಜಪ್ಪ, ರಾಜಶೇಖರ್, ಆಂಜನೇಯ, ಪಾರ್ಥಸಾರಥಿ, ಚಿನ್ನಪ್ಪ, ಭಾರತ್, ಮಲ್ಲಯ್ಯ, ವೆಂಕಟರೆಡ್ಡಿ, ಸೀನಪ್ಪ, ನರಸಿಂಹಪ್ಪ, ನಾಗರಾಜ್, ಜಯರಾಮರೆಡ್ಡಿ, ಓಬಣ್ಣ, ವೆಂಕಟರೋಣಪ್ಪ, ಬೈರಾರೆಡ್ಡಿ, ಮಂಜುನಾಥ್, ರಮೇಶ್, ಕೊಂಡಪ್ಪ, ಅಶೋಕ್, ರಾಜೇಶ್, ಪೆದ್ದಪ್ಪಯ್ಯ, ಅಕ್ರಂ, ಮೂರ್ತಿ, ನರಸಿಂಹಪ್ಪ, ಲೋಕೇಶ್, ಆಂಜಿ, ಖಲೀಂ, ಗೋಪಣ್ಣ, ಕೇಶವರೆಡ್ಡಿ, ವೆಂಕಟಸ್ವಾಮಿ, ಕಿಶನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT