ಬೆಂಗಳೂರು: ಪರೇಶ್ ಮೇಸ್ತ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಂತಕರನ್ನು ಬಂಧಿಸಲು ಕರ್ನಾಟಕ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸಚಿವ ರಾಜನಾಥ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಿದ ಸಿಂಗ್, ರಾಜ್ಯದಲ್ಲಿನ ಆಡಳಿತಾರೂಢ ಪಕ್ಷವು ಗೌರಿ ಹತ್ಯೆ ಪ್ರಕರಣದ ಬಗ್ಗೆ ತೀವ್ರ ತನಿಖೆ ನಡೆಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು, ನಾವು ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.
ಬಲಪಂಥೀಯ ವಿಚಾರಧಾರೆ ವಿರುದ್ಧ ದನಿಯೆತ್ತುತ್ತಿದ್ದ ಗೌರಿ ಲಂಕೇಶ್ ಸೆಪ್ಟೆಂಬರ್ 5ರಂದು ಹತ್ಯೆಯಾದರು. ಅವರು ಹತ್ಯೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು.ಅದರ ನಡುವೆಯೇ ಬಲಪಂಥೀಯ ಕಾರ್ಯಕರ್ತರ ಮೇಲೆ ಆ ವಿಚಾರಧಾರೆ ಹೊಂದಿದವರ ಮೇಲೆ ಟೀಕಾ ಪ್ರಹಾರಗಳು ನಡೆದವು. ಗೌರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದವರ ಹೆಸರನ್ನು ಒಂದು ವಾರದೊಳಗೆ ಬಹಿರಂಗ ಪಡಿಸಲಾಗುವುದು ಎಂದು ಕರ್ನಾಟಕ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ಪ್ರಸ್ತುತ ಪ್ರಕರಣ ಭೇದಿಸಿಲ್ಲ.
"BJP to fight upcoming assembly elections in Karnataka under B. S. Yeddyurappa Ji's leadership," says Home Minister Rajnath Singh in a rally in Bengaluru pic.twitter.com/QZ82FodFda