ಆರೋಪ: ದೊಡ್ಡಕೊಪ್ಪ ಗ್ರಾಮದಲ್ಲಿ ಚುನಾವಣೆಯ ಅಗತ್ಯವಿರಲಿಲ್ಲ. ಗ್ರಾಮಸ್ಥರು ಸೇರಿ ಅವಿರೋಧ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದರು. ಜೆ.ಡಿ.ಎಸ್ ಉದ್ದೇಶಪೂರ್ವಕವಾಗಿ 85 ವರ್ಷದ ಕಾಳಮ್ಮ ಅವರನ್ನು ಕಣಕ್ಕಿಳಿಸಿ ಚುನಾವಣಾ ಪ್ರಚಾರಕ್ಕೆ ಬಾರದೆ ದೂರ ಉಳಿದು, ಅನಗತ್ಯ ಚುನಾವಣೆ ನಡೆಯುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎಂ.ರಾಜೇಂದ್ರ ಆರೋಪಿಸಿದರು. ಐ.ಗೊಲ್ಲಳ್ಳಿ ಕಾಂಗ್ರೆಸ್ ಮುಖಂಡ ಉಮೇಶ್, ದೊಡ್ಡಕೊಪ್ಪರಾಜು, ನಾಸೀರ್, ಜಮೀರ್ಅಹಮ್ಮದ್, ಶಿವರಾಜು, ದೀಪು ಇದ್ದರು.