'ಅರಿವಿನ ಪಯಣ' ಪುಸ್ತಕ ಬಿಡುಗಡೆ ನಡೆಯಿತು. 'ನೀಲಿ ರಿಬ್ಬನ್' ಏಕವ್ಯಕ್ತಿ ನಾಟಕ ಪ್ರದರ್ಶನ ಮಾಡಲಾಯಿತು. ಜ್ಯೋತಿ ಗೊಂಡಬಾಳ, ಅಶ್ವಿನಿ ಆರೇರ್ ಮಾತನಾಡಿದರು. ಪ್ರಾಂಶುಪಾಲ ಸದಾಶಿವ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿಸ್ತಾರ್ ಸಂಸ್ಥೆಯ ಆಶಾ ಇದ್ದರು. ಸರೋಜಾ ಬಾಕಳೆ ಸ್ವಾಗತಿಸಿದರು. ಕೆವಿಎಸ್ ತಂಡದವರು ಮಹಿಳಾ ಜಾಗೃತಿಯ ಗೀತೆ ಹಾಡಿದರು. ಜೀವಯಾನ ಬಳಗದ ಎಚ್.ವಿ.ರಾಜಾಬಕ್ಷಿ ವಂದಿಸಿದರು.