ಸುತ್ತಲಿನ ಕರಡಿದೊಡ್ಡಿ, ಲಕ್ಕನದೊಡ್ಡಿ, ಧಾರಾಪುರ, ಎಲೇದೊಡ್ಡಿ, ಕುಂಬಾರದೊಡ್ಡಿ, ತಿಮ್ಮೇಗೌಡನ ದೊಡ್ಡಿ ಭಾಗಗಳ ಜನರು ಈ ರಸ್ತೆಯನ್ನು ಬಳಸುತ್ತಾ ಬಂದಿದ್ದಾರೆ. ಇದನ್ನು ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಇದೆಯಾದರೂ, ಅದು ಕಾಗದದ ರೂಪದಲ್ಲಿಯೇ ಉಳಿದಿದೆ ಎಂದು ಸ್ಥಳೀಯರು ದೂರಿದ್ದಾರೆ.
ಅಪಘಾತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸೇತುವೆ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಿಸಬೇಕು ಎನ್ನುವುದು ಸುತ್ತಲಿನ ನಿವಾಸಿಗಳ ಆಗ್ರಹ.