ಸದಸ್ಯ ಪಿ. ಚಂದ್ರಶೇಖರ ಮಾತನಾಡಿ, ‘ಸಾಮಾನ್ಯ ಸಭೆ ನಡೆಸದೆ ಸಿಬ್ಬಂದಿ ವೇತನ, ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಿಲ್ಲ. ಅಧ್ಯಕ್ಷರಿಗೆ ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ತಿಳಿಸಿದರು ಉಪಯೋಗವಾಗಲಿಲ್ಲ. ತುರ್ತುಸಭೆ ಯಲ್ಲಿ ಅಧ್ಯಕ್ಷರ ಚಟುವಟಿಕೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮದಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಅಧ್ಯಕ್ಷೆಯೇ ಹೊಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.