‘ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಹೊರಟು ಹೋಗಿದೆ. ಹೋರಾಟ ಸಮಿತಿ ನಿರ್ಧರಿಸಿದಂತೆ ಮಹದಾಯಿ ಹೋರಾಟ ಮುಂದುವರಿಯಲಿದೆ. ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟ ನಿಲುವು ತೋರುತ್ತಿಲ್ಲ. ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ’ ಎಂದು ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್.ಬಿ.ಜೋಗಣ್ಣವರ ಹೇಳಿದರು. ಧರಣಿಯಲ್ಲಿ ವೆಂಕಪ್ಪ ಹುಜರತ್ತಿ, ರಮೇಶ ನಾಯ್ಕರ, ಹನಮಂತ ಪಡೆಸೂರ, ಈರಣ್ಣ ಗಡಗಿಶೆಟ್ಟರ, ಯಲ್ಲಪ್ಪ ಗುಡದರಿ, ಲಕ್ಷ್ಮಣ ಮುನೇನಕೊಪ್ಪ, ವಾಸು ಚವ್ಹಾಣ ಇದ್ದರು.