ನಿಗದಿತ ಸಮಯಕ್ಕೆ ವ್ಯಾಗನ್ದಿಂದ ಕಲ್ಲಿದ್ದಲು ಹೊರ ಹಾಕಲು ಯಶಸ್ವಿಯಾದ ಬಗ್ಗೆ ಸ್ಥಳೀಯ ಅಧಿಕಾರಿಗಳು, ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರನಾಯಕ ಅವರ ಗಮನಕ್ಕೆ ತಂದಿದ್ದಾರೆ. ಕೆಪಿಸಿಎಲ್ ವ್ಯವಸ್ಥಾಪಕರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿ.9ರಂದು ಸಂಪೂರ್ಣವಾಗಿ ಕಲ್ಲಿದ್ದಲು ಖಾಲಿ ಮಾಡಲು 30 ತಾಸು ತೆಗೆದುಕೊಂಡ ಕಾರಣ ರೈಲ್ವೆ ಇಲಾಖೆಯ ಅಧಿಕಾರಿಗಳು ₹2.47 ಲಕ್ಷ ದಂಡ ಹಾಕಿದ್ದರು.