ಆದರೆ, ಸಿದ್ದರಾಮಯ್ಯ ಅವರೇ ಸಭಿಕರನ್ನು ನಗಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ! ತಮ್ಮ ಭಾವಾಭಿನಯ, ವಿಶಿಷ್ಟ ಶೈಲಿಯ ಮಾತಿನ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದ್ದಾರೆ. ಇವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ‘ವಸ್ತು’. ಮಿಷನ್ 150 ಠುಸ್ಸ್, ಸೈಕಲ್ ಕೊಟ್ಟೆ, ಸೀರೆ ಕೊಟ್ಟೆ ಎನ್ನುವುದು ಹಾಗೂ ಯಡಿಯೂರಪ್ಪ ಅವರು ಪ್ಯಾಂಟನ್ನು ಮೇಲೆ ಎತ್ತಿಕೊಳ್ಳುವ ರೀತಿ ಅಭಿನಯಿಸುವಾಗ ನಗು ಅಲೆಯಾಗುತ್ತದೆ.