ಕ್ರೈಸ್ತ ಧರ್ಮ ಸಂದೇಶ ಪ್ರಸಾರ, ಶಾಂತಿ, ಪ್ರೀತಿ, ಸಹ ಭಾಳ್ವೆಯ ಮಂತ್ರ ಸಾರುವುದೇ ನಮ್ಮ ಮೂಲ ಉದ್ದೇಶ. ಜತೆಗೆ ಪಟ್ಟಣದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳು, ಸಮೀಪದ ಮನ್ನಾ ಎಖ್ಖೇಳಿ ಗ್ರಾಮದಲ್ಲಿ ಮಕ್ಕಳ ಅಭಿವೃದ್ಧಿ ಕೇಂದ್ರಗಳು ನಡೆಸುವ ಮೂಲಕ ಗ್ರಾಮೀಣ ಭಾಗದ ನಾಗರಿಕರಲ್ಲಿ ಶೈಕ್ಷಣಿಕ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಎ.ಇಮಾನವೆಲ್.