ಪ್ರಜಾತಂತ್ರದ ಪ್ರಮುಖ ಸ್ತಂಭಗಳೆನಿಸಿರುವ ಸಂಸತ್ತು ಹಾಗೂ ವಿಧಾನಸಭೆಗಳು ಚರ್ಚೆ, ಸಂವಾದಗಳ ವೇದಿಕೆಯಾಗುವ ಬದಲು, ಗದ್ದಲ–ಗಲಾಟೆಗಳಿಂದ ತುಂಬಿದ ಕುಸ್ತಿಯ ಕಣಗಳಾಗುತ್ತಿರುವುದು ಕಳವಳಕಾರಿ ಸಂಗತಿ.
ಕ್ಷುಲ್ಲಕಕಾರಣ ಮುಂದೆ ಮಾಡಿ, ವಿರೋಧಕ್ಕಾಗಿಯೇ ವಿರೋಧಮಾಡುವ ಪ್ರತಿಪಕ್ಷಗಳು ಸದನದ ಕಲಾಪ ನಡೆಯದಂತೆ ತಡೆ ಒಡ್ಡುತ್ತ ಅಮೂಲ್ಯ ಸಮಯ, ಶಕ್ತಿ ಹಾಗೂ ತೆರಿಗೆದಾರರ ಹಣ ಹಾಳು ಮಾಡುತ್ತಿರುವುದು ಖಂಡನೀಯ.
ಪ್ರಚಾರ ಗಿಟ್ಟಿಸುವುದೇ ದೇಶ ಸೇವೆ ಎಂದು ಬಗೆದವರಿಗೆ ಜನರೇ ಉತ್ತರ ನೀಡಬೇಕು.