ಪ್ರಪಂಚದಲ್ಲಿರುವ ಅನೇಕ ಪರ್ವತ, ಶಿಖರಗಳನ್ನು ಹತ್ತಿ ಸಾಧನೆಯ ಮೂಲಕ ಕೀರ್ತಿ ಪಡೆದವರಿದ್ದಾರೆ. ಹಾಗೆಯೇ ವಿಫಲರಾದವರೂ ಇದ್ದಾರೆ. ಮನುಷ್ಯನ ಬದುಕಲ್ಲಿ ನೈತಿಕತೆ ಮತ್ತು ಆಧ್ಯಾತ್ಮಿಕತೆ ಎಂಬ ಎರಡು ಶಿಖರಗಳಿವೆ. ಅಹಂ ಎಂಬ ಶಿಖರ ಹತ್ತುವುದು ಸುಲಭ ಆದರೆ ಇಳಿಯುವುದು ಕಷ್ಟ. ಸರಳತೆ, ವಿನಮ್ರತೆ, ಪರಿಶುದ್ಧತೆ, ಕ್ಷಮೆಗಳ ಮೂಲಕ ಅಹಂ ಅನ್ನು ತೊಡೆದುಹಾಕಬಹುದು. ಇದನ್ನೇ ಏಸುಪ್ರಭು ಮಾಡಿದ್ದರು. ಏಸು ಹುಟ್ಟಿದ್ದು ಗೋದಲಿಯಲ್ಲಿ, ಬದುಕಿದಾಗಲೂ ಒಂದು ಸ್ಥಳವಿರಲಿಲ್ಲ, ಸತ್ತನಂತರವೂ ಸ್ವಂತ ಸಮಾಧಿ ಇರಲಿಲ್ಲ. ಕಾರಣ ಇಷ್ಟೇ, ನಾವೆಲ್ಲರೂ ದೇವರ ಸೃಷ್ಟಿ. ಎಲ್ಲವನ್ನು ದೇವರಿಗೆ ಅರ್ಪಿಸಬೇಕು ಎಂದು ಪೌಲ್ ಡಿಸೋಜ ತಿಳಿಸಿದರು.