ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ₹ 448 ಕೋಟಿ ಬಿಡುಗಡೆ ಮಾಡುತ್ತಿರುವ ವಿಚಾರ ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಪ್ರಚಾರದ ದೊಡ್ಡ ವಿಷಯವಾಗಲಿದೆ. ಜತೆಗೆ ಕುರುಬ, ಕುಂಚಿಟಿಗ, ಬಲಿಜ, ಈಡಿಗ, ಮಡಿವಾಳ, ಸವಿತಾ ಸಮಾಜ, ಕುಂಬಾರ, ಮುಸ್ಲಿಮರ ಶಾದಿ ಮಹಲ್ಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರಣ ಈ ಸಮುದಾಯಗಳ ಜನರು ಹೆಚ್ಚು ಸೇರುವ ನಿರೀಕ್ಷೆ ಸಂಘಟಕರಲ್ಲಿದೆ. ದಲಿತರಿಗೆ ಪ್ರೊ.ಕೃಷ್ಣಪ್ಪ ಸ್ಮಾರಕ ಸಮುದಾಯ ಭವನ, ದೇವರಾಜ ಅರಸು ಸಮುದಾಯ ಭವನಗಳಿಗೂ ಭೂಮಿ ಪೂಜೆ ನಡೆಯಲಿದೆ.