‘ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದಲ್ಲಿ ತಂಬಾಕು ಮಾರುಕಟ್ಟೆ ಮಾಡುತ್ತೇನೆ ಎಂದು ಅದ್ಧೂರಿಯಾಗಿ ಭೂಮಿಪೂಜೆ ಮಾಡಿಸಿ ಹೋದವರು ಮತ್ತೆ ಈ ಬಗ್ಗೆ ಚಕಾರ ಎತ್ತಿಲ್ಲ. ಇಂತಹ ಸುಳ್ಳು ಭರವಸೆ ನೀಡುವ ಅಭ್ಯರ್ಥಿಗಳಿಂದ ನಿಮಗೆ ಸಹಾಯ ಆಗುವುದಿಲ್ಲ’ ಎಂದು ಅವರು ಹೇಳಿದರು. ಬಡಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶೇಖರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬಿ.ಜೆ.ಪಿ. ಮುಖಂಡರಾದ ಕೆಂಪರಾಜು, ರಾಜೇಗೌಡ, ವಿಶ್ವನಾಥ್, ಯೋಗೇಶ್, ಡಿ.ಆರ್.ಶಿವಣ್ಣ, ಕೃಷ್ಣಶೆಟ್ಟಿ, ಮೋಹನ, ಸಿದ್ದೇಗೌಡ, ಲಿಂಗರಾಜು, ಬಳೆ ಮಂಜು, ಅಶೋಕ ಇದ್ದರು.